ಮಾತುಮಾತಿಗೆ

ಮಾತುಮಾತಿಗೆ ಸಿಟ್ಟುಮಾಡಿದಿರಿ
ಪಾತ್ರೆ ಪಗಡೆಗಳ ಒಡೆದುಹಾಕಿದಿರಿ
ಕಂಡಕಂಡವರಿಗೆ ಕೆಂಡವಾದಿರಿ
ಸಿಟ್ಟು ನಾಶಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ

ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ
ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ
ಸಾಕೆಂಬ ಪದವನ್ನೆ ಮರೆತುಬಿಟ್ಟಿರಿ
ಆಸೆಯೇ ದುಃಖಕ್ಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ

ಅನ್ಯರೆಂದು ಹಿಂಸೆ ನೀಡಿದಿರಿ
ಆಟವೆಂದು ಬೇಟೆಯಾಡಿದಿರಿ
ಹಾರುವ ಪಾರಿವಕೆ ಗುರಿಯಿಟ್ಟು ಹೊಡೆದಿರಿ
ಹಿಂಸೆಯೇ ಬಹು ದೊಡ್ಡ ಪಾಪವೆಂದ ನಮ್ಮ
ಬುದ್ಧನ ಕೇಳಿದಿರ

ಕರುಣೆ ತೋರಿದರೆ ತಮಗೇನು ಎಂದಿರಿ
ದಾನಧರ್ಮಗಳೆಲ್ಲ ಸುಳ್ಳು ಎಂದಿರಿ
ಪಡೆಯದಲ್ಲದೆ ಕೊಡಲಾರೆವೆಂದಿರಿ
ಕಾರಣ ವಿನಾ ಪ್ರೀತಿ ನಿಜವಾದ ಪ್ರೀತಿಯೆಂದ ನಮ್ಮ
ಬುದ್ಧನ ಕೇಳಿದಿರ

ಗಹಗಹ ನಗೆಗಿಂತ ಮುಗುಳುನಗೆ ಮಿಗಿಲೆಂದ
ಬಡಬಡ ನುಡಿಗಿಂತ ಮೌನವ ಲೇಸೆಂದ
ಆಧ್ಯಾತ್ಮಕಿಂತ ಮಹಾಮೌನವೇ ಒಳಿತೆಂದ
ನಮ್ಮ ಬುದ್ಧನ ಕೇಳಿದಿರ
ನೀವು ನಮ್ಮ ಬುದ್ಧನ ಕೇಳಿದಿರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಹಿಸಿಹಿ ಕತೆ
Next post ಸೂರುಕೊಡಿ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys